ಮೇಘ ಮೂವೀಸ್ ಲಾಂಛನದಲ್ಲಿ ಸುಮನ ಕಿತ್ತೂರು ಹಾಗೂ ರವೀಂದ್ರ ಅವರು ನಿರ್ಮಿಸುತ್ತಿರುವ ‘ಕಿರಗೂರಿನ ಗಯ್ಯಾಳಿಗಳು ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಕೆಲವು ದಿನಗಳ ಹಿಂದೆ ಚಿತ್ರದ ಫ಼ಸ್ಟ್ಲುಕ್ ಬಿಡುಗಡೆ ಮಾಡಲಾಗಿತ್ತು. ವಿಭಿನ್ನವಾಗಿರುವ ‘ಕಿರಗೂರಿನ ಗಯ್ಯಾಳಿಗಳು ಚಿತ್ರದ ಫ಼ಸ್ಟ್ಲುಕ್ ಜನಮನಸೂರೆಗೊಂಡಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಸುಮನ ಕಿತ್ತೂರು ನಿರ್ದೇಶನದ ‘ಕಿರಗೂರಿನ ಗಯ್ಯಾಳಿಗಳು ಚಿತ್ರಕ್ಕೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಮತ್ತು ಸುಮನ ಕಿತ್ತೂರು ಬರೆದಿದ್ದಾರೆ. ಸಾಧುಕೋಕಿಲ ಅವರು ಹಿನ್ನಲೆ ಸಂಗೀತ ನೀಡಿರುವ ಈ ಚಿತ್ರಕ್ಕೆ ಮನೋಹರ್ ಜೋಶಿ ಅವರ ಛಾಯಾಗ್ರಹಣವಿದೆ.
ಶ್ವೇತ ಶ್ರೀವಾಸ್ತವ್, ಯೋಗೀಶ್(ಲೂಸ್ಮಾದ), ಅಜಯ್ರಾವ್, ಕಿಶೋರ್, ಸುಕೃತ ವಾಗ್ಲೆ, ಸೋನು ಗೌಡ, ಕಾರುಣ್ಯರಾಮ್, ಅಚ್ಯುತಕುಮಾರ್, ಶರತ್ ಲೋಹಿತಾಶ್ವ, ಸುಂದರ್, ಎಸ್.ನಾರಾಯಣ್, ಗಿರಿಜಾ ಲೋಕೇಶ್, ಲಕ್ಷ್ಮೀಚಂದ್ರಶೇಖರ್, ರವಿಶಂಕರ್ ಗೌಡ, ಅನಂತವೇಲು, ರಾಹುಲ್ ಮಾಧವನ್, ನಿಖಿಲ್ ಮಂಜು, ಶಾಂತ ಆಚಾರ್ಯ, ಶೊಭ್ರಾಜ್, ಮಂಡ್ಯ ರಮೇಶ್, ಧರ್ಮ, ಕೆ.ಎಸ್.ಡಿ.ಎಲ್ ಚಂದ್ರು, ಸಂಪತ್ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.